ವಿರಾಜಪೇಟೆ.
ವಿರಾಜಪೇಟೆ ತಾಲೂಕು ಗೋಣಿಕೊಪ್ಪ ಮುಖ್ಯ ರಸ್ತೆಯ ಬಿಟ್ಟಂಗಾಲ ಮುಖ್ಯ ರಸ್ತೆ ಬದಿಯಲ್ಲಿ ಅಪರಿಚಿತ ಶವವು ಇಂದು ಸಂಜೆ ಪತ್ತೆಯಾಗಿದೆ. ಸುದ್ದಿ ತಿಳಿದ ವಿರಾಜಪೇಟೆ ಗ್ರಾಮಂತರ ಪೊಲೀಸರು ಪರಿಶೀಲಿಸಿದಾಗ, ಆಸ್ಪತ್ರೆ ಚೀಟಿ ದೊರಕಿದ್ದು ಅದರಲ್ಲಿ ಕೆ. ಕೆ ರಾಜು ಎಂಬ ಹೆಸರು ಇರುವುದನ್ನು ಗುರುತಿಸಲ್ಪಟ್ಟಿದೆ. ಮೃತ ದೇಹವನ್ನು ಇದೀಗ ಮಡಿಕೇರಿ ಶವಗಾರಕ್ಕೆ ರವಾನಿಸಲಾಗಿದೆ.
ಮೃತಪಟ್ಟ ವ್ಯಕ್ತಿಯ ಪರಿಚಯ ಹಾಗೂ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ವಿರಾಜಪೇಟೆ ಗ್ರಾಮಂತರ ಠಾಣೆಗೆ ಮಾಹಿತಿ ನೀಡುವಂತೆ ಕೊರಲಾಗಿದೆ.
ಮೃತಪಟ್ಟ ವ್ಯಕ್ತಿ ಆನಾರೋಗ್ಯ ಸಮಸ್ಯೆಯಿಂದ ಮೃತಪಟ್ಟಿರಬಹುದು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.