One Tap News - Kannada News Daily

Header
collapse
...
Home / Mysore / ಲಕ್ಷ್ಮಣಗೆ ಜಾಮೀನು, ಪುಷ್ಪಾ ಅಮರನಾಥ್ ವಿರುದ್ಧ ಜಾಮೀನುರಹಿತ ವಾರೆಂಟ್.

ಲಕ್ಷ್ಮಣಗೆ ಜಾಮೀನು, ಪುಷ್ಪಾ ಅಮರನಾಥ್ ವಿರುದ್ಧ ಜಾಮೀನುರಹಿತ ವಾರೆಂಟ್.

2025-10-16  Mysore Desk  116 views
ಲಕ್ಷ್ಮಣಗೆ ಜಾಮೀನು, ಪುಷ್ಪಾ ಅಮರನಾಥ್ ವಿರುದ್ಧ ಜಾಮೀನುರಹಿತ ವಾರೆಂಟ್.

 

ಮೈಸೂರು 

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹ ಅವರು ಶ್ರೀ ಲಕ್ಷ್ಮಣ ವಿರುದ್ಧ ದಾಖಲಿಸಿರುವ ಎರಡು ಖಾಸಗಿ ದೂರುಗಳು (C.C. No. 10706/2024 ಮತ್ತು C.C. No. 13773/2024) ಇಂದು ಬೆಂಗಳೂರು 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದವು. ಈ ದೂರುಗಳು ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ನಿಂದನೆ ಅಪರಾಧಕ್ಕೆ ಸಂಬಂಧಿಸಿದವು.

ಇಂದು ಆರೋಪಿಯಾದ  ಲಕ್ಷ್ಮಣ ಅವರು ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಜಾಮೀನುಗಾಗಿ ಅರ್ಜಿ ಸಲ್ಲಿಸಿದರು. ವಿಚಾರಣೆ ನಂತರ ಮಾನ್ಯ ನ್ಯಾಯಾಲಯವು ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಿದೆ.

1001756416.jpg

ಇದೇ ವೇಳೆ ಶ್ರೀ ಪ್ರತಾಪ್ ಸಿಂಹ ಅವರು ಶ್ರೀಮತಿ ಪುಷ್ಪಾ ಅಮರನಾಥ ವಿರುದ್ಧ ದಾಖಲಿಸಿದ ಮತ್ತೊಂದು ಖಾಸಗಿ ದೂರು (C.C. No. 12586/2024), ಇದು ಸಹ ಬೆಂಗಳೂರು 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಬಾಕಿಯಿದೆ, ಇಂದು ವಿಚಾರಣೆಗೆ ಬಂದಿತ್ತು. ಆರೋಪಿಯಾದ ಪುಷ್ಪಾ ಅಮರನಾಥ ಅವರು ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ, ಮಾನ್ಯ ನ್ಯಾಯಾಲಯವು ಜಾಮೀನಿಲ್ಲದ ವಾರಂಟ್‌ (NBW) ಹೊರಡಿಸಿದೆ.


Share: