ವಿರಾಜಪೇಟೆ
ವಿರಾಜಪೇಟೆಯ ಗಾಂಧಿನಗರದಲ್ಲಿ ರಕ್ಷಣಾ ಸಚಿವಾಲಯದಿಂದ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ದರ್ಜೆಯ ಚಿಕಿತ್ಸೆ ನೀಡುವ ಸಲುವಾಗಿ ಈ ಕಟ್ಟಡ ನಿರ್ಮಾಣ ವಾಗಲಿದೆ.
ಇಂದು ಗುದ್ದಲಿ ಪೂಜೆ ಸಂದರ್ಭದಲ್ಲಿ ಸ್ಥಳೀಯ ಸದಸ್ಯರಾದ ಜೂನ ಸುನೀತಾ, ಮಾಜಿ ಸೈನಿಕರಾದ ಕಾರ್ಯಪ್ಪ, ಭರತ್, ತಿಮ್ಮಣ್ಣ, ಲಕ್ಮಿನಾರಯಣ, ಗಣೇಶ್ ನಂಜಪ್ಪ ಸೇರಿದಂತೆ ಇ.ಸಿ.ಎಚ್ ಎಸ್ ನ ಸಿಬ್ಬಂದಿ ಗಳು ಉಪಸ್ಥಿತರಿದ್ದರು.