One Tap News - Kannada News Daily

Header
collapse
...
Home / Kodagu / ಕಾಡಾನೆ ಉಪಟಳ ತಡೆಗಟ್ಟುವಂತೆ ಶಾಸಕರಿಗೆ ಮನವಿ ಸಲ್ಲಿಸಿದ ಕೈಕೇರಿ ಗ್ರಾಮಸ್ಥರು

ಕಾಡಾನೆ ಉಪಟಳ ತಡೆಗಟ್ಟುವಂತೆ ಶಾಸಕರಿಗೆ ಮನವಿ ಸಲ್ಲಿಸಿದ ಕೈಕೇರಿ ಗ್ರಾಮಸ್ಥರು

2025-12-04  Kodagu Desk  57 views
ಕಾಡಾನೆ ಉಪಟಳ ತಡೆಗಟ್ಟುವಂತೆ ಶಾಸಕರಿಗೆ ಮನವಿ ಸಲ್ಲಿಸಿದ ಕೈಕೇರಿ ಗ್ರಾಮಸ್ಥರು

ಗೋಣಿಕೊಪ್ಪ. 

ಕೈಕೇರಿ ಗ್ರಾಮದ ಜನರು ತಮ್ಮ ಗ್ರಾಮದಲ್ಲಿ ಆನೆಗಳಿಂದ ಆಗುತ್ತಿರುವ ತೊಂದರೆಗಳ ಕುರಿತು ಶಾಸಕ ಶ್ರೀ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಕೈಕೇರಿ ಗ್ರಾಮದ ಮುಖಂಡರಾದ ವಾಸು ಅವರ ನೇತೃತ್ವದಲ್ಲಿ ಗ್ರಾಮಸ್ಥರ ನಿಯೋಗವು ಶಾಸಕರನ್ನು ಭೇಟಿ ಮಾಡಿ, ಆನೆಗಳಿಂದ ಗ್ರಾಮಸ್ಥರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವಂತೆ ಒತ್ತಾಯಿಸಿದೆ.

ಶಾಸಕರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.


Share: