ಹುಣಸೂರು.
ಹುಣಸೂರು ತಾಲ್ಲೂಕಿನ ಕಟ್ಟೆ ಮಳಲವಾಡಿ ಗ್ರಾಮದಲ್ಲಿ ನಡೆದ ತಂಬಾಕು ಹರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೊಡಗು-ಮೈಸೂರು ಸಂಸದ ಮಹಾರಾಜ ಯದುವೀರ್ ಒಡೆಯರ್.
ತಂಬಾಕು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ ಸಂಸದರು ಜಿಲ್ಲೆಯ ವಿವಿಧೆಡೆಯಿಂದ ಮಾರುಕಟ್ಟೆಗೆ ರೈತರು ತಂದಿದ್ದ ತಂಬಾಕು ಬೆಳೆ ಹಾಗೂ ಅವುಗಳ ಗುಣಮಟ್ಟ ಮತ್ತು ದರವನ್ನು ಪರಿಶೀಲಿಸಿ ರೈತರೋಡನೆ ಬೆಳೆಯ ಬಗ್ಗೆ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿ ಪಡೆದರು.